Monday, November 7, 2011

ಕನ್ನಡ ರಾಜ್ಯೋತ್ಸವ

ನಿಜವಾದ ಕನ್ನಡಿಗರಿಗೆ
ನಿತ್ಯೋತ್ಸವ...
ಹುಸಿ ಕನ್ನಡಿಗರಿಗೆ
ನವೆಂಬರೋತ್ಸವ

Saturday, February 5, 2011

ಸಾಹಿತ್ಯ ಪ್ರಕಾರ...

ರಾಜಕೀಯವನ್ನು ಸಾಹಿತ್ಯದಿಂದ
ದೂರವಿಡಲು  ಆಗದು..
ಏಕೆಂದರೆ, ನಾಟಕವೂ
ಸಾಹಿತ್ಯದ  ಪ್ರಕಾರಗಳಲ್ಲೊಂದು

ಸಾಹಿತ್ಯ ಸಮ್ಮೇಳನದಲ್ಲಿ...

ಹೊಟ್ಟೆ ಹಸಿದವರಿಗೆ..
ಅನ್ನವಿದೆ, ಸಾರು ಇಲ್ಲ...
ಹಾಗೆಯೇ...
ಸಾಹಿತ್ಯಕ್ಕೆ  ಹಸಿದವರಿಗೆ..
ಮಾತು ಇದೆ, ಸಾರವಿಲ್ಲ.